ನಮ್ಮ ಕುರಿತು

ಸತ್ತಂತಿಹರನ್ನು ಬಡಿದೆಚ್ಚರಿಸು, ಕಚ್ಚಾಡುವವರನು ಕೂಡಿಸಿ ಒಲಿಸು

ಮನಸು, ಕನಸು

ಕೋಟಿ ಮನಸು ಒಂದೇ ಕನಸು

ಮನಸು

ಯುವಾಬ್ರಿಗೇಡ್‌ ದೇಶಭಕ್ತಿ, ನಾಯಕತ್ವ ಮತ್ತು ಸೇವಾ ಮನೋಭಾವದೊಂದಿಗೆ ಯುವಕರನ್ನು ಸಬಲೀಕರಣಗೊಳಿಸುವ ಮೂಲಕ ಬಲವಾದ, ಸ್ವಾವಲಂಬಿ ಮತ್ತು ಸಾಂಸ್ಕೃತಿಕವಾಗಿ ಹೆಮ್ಮೆಯ ಭಾರತವನ್ನು ನಿರ್ಮಿಸಲು ಸಮರ್ಪಿತವಾಗಿದೆ. ಯುವ ಮನಸ್ಸುಗಳಲ್ಲಿ ರಾಷ್ಟ್ರೀಯ ಹೆಮ್ಮೆ, ನೈತಿಕ ಜೀವನ ಮತ್ತು ಸಮುದಾಯದ ಜವಾಬ್ದಾರಿಯ ಮನೋಭಾವವನ್ನು ಜಾಗೃತಗೊಳಿಸುವುದು, ಅವರನ್ನು ಉತ್ತಮ ಭವಿಷ್ಯದ ಶಿಲ್ಪಿಗಳನ್ನಾಗಿ ರೂಪಿಸುವುದು ನಮ್ಮ ಧ್ಯೇಯವಾಗಿದೆ.

ಕನಸು

ಜಗತ್ತಿಗೆ ಮಾರ್ಗದರ್ಶನ ನೀಡುವ ಜಾಗತಿಕ ನಾಯಕನಾಗಿ - ವಿಶ್ವಗುರುವಾಗಿ - ಭಾರತವು ಉದಯಿಸಬೇಕೆಂದು ಯುವಾಬ್ರಿಗೇಡ್‌ ಕನಸು ಕಾಣುತ್ತದೆ. ಆ ಮೂಲಕ ಅವರು ಭಾರತದ ಶ್ರೀಮಂತ ಸಂಪ್ರದಾಯಗಳೊಂದಿಗೆ ಸಂಪರ್ಕದಲ್ಲಿರುವಂತೆ ಮಾಡುವುದು ಮತ್ತು ಸಮಾಜವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವ ಪೀಳಿಗೆಯನ್ನು ಸೃಷ್ಟಿಸುವುದು.

ನಮ್ಮ ಕಥೆ ಮತ್ತು ಟೈಮ್‌ಲೈನ್

ಪ್ರೇರಣೆಯ ಹಾದಿ

ನಮ್ಮ ಪ್ರಯಾಣವನ್ನು ರೂಪಿಸಿದ ಪ್ರಮುಖ ಘಟ್ಟಗಳು

2014 ಪ್ರಾರಂಭದ ಕಥನ

ಪ್ರಾರಂಭದ ಕಥನ

2014ರಲ್ಲಿ “ಕೋಟಿ ಮನಸು ಒಂದೇ ಕನಸು” ಎಂಬ ಧ್ಯೇಯ ಹಾಗೂ ವಿಶ್ವಗುರು ಭಾರತದ ಸಂಕಲ್ಪದೊಂದಿಗೆ ಯುವಾ ಬ್ರಿಗೇಡ್ ಆರಂಭವಾಯಿತು. ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ಕುಳಿತು ಧ್ಯಾನ ಮಾಡಿದ ದಿನದ ಸ್ಮರಣಾರ್ಥ ಡಿಸೆಂಬರ್ 25ರಂದು “ರಾಕ್ ಡೇ” ಆಚರಿಸಿ ರಾಜ್ಯದಾದ್ಯಂತ ಮೊದಲ ಹೆಜ್ಜೆ ಇಟ್ಟಿತು. ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ “ಸಾವಿರದ ವಿವೇಕಾನಂದ” ಅಭಿಯಾನ ನಡೆಸಿ, 2000ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಯುವಕರು ಅವರ ಚಿಂತನೆಗಳನ್ನು ಹರಡಿದರು.

2018 ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ ಕಲ್ಯಾಣಿ ಸ್ವಚ್ಛತಾ ಅಭಿಯಾನ

ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ ಕಲ್ಯಾಣಿ ಸ್ವಚ್ಛತಾ ಅಭಿಯಾನ

ರಾಜ್ಯದಲ್ಲಿ ಅಳಿವಿನಂಚಿನಲ್ಲಿದ್ದ ನೂರಾರು ಕಲ್ಯಾಣಿಗಳ ಪುನರುಜ್ಜೀವನ ಕಾರ್ಯ ಕೈಗೊಂಡು, ಗದಗದ ಕೊನೇರಿ ಹೊಂಡ ಸೇರಿದಂತೆ ಹಲವು ಜಲಮೂಲಗಳಿಗೆ ಹೊಸ ಜೀವ ತುಂಬಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ಮತ್ತು ಸರ್ಕಾರದ ಮೆಚ್ಚುಗೆಯೂ ದೊರೆಯಿತು. ಕಲ್ಯಾಣಿಗಳ ಪುನರುಜ್ಜೀವನದ ಜೊತೆಗೆ, ನದಿ ಸ್ವಚ್ಛತಾ ಅಭಿಯಾನಕ್ಕೂ ವೇಗ ನೀಡಲಾಯಿತು. ಧರ್ಮಸ್ಥಳದ ನೇತ್ರಾವತಿ,ಕಲಬುರಗಿಯ ಭೀಮಾ,ಮಂತ್ರಾಲಯದಲ್ಲಿ ತುಂಗಭದ್ರಾ ಮತ್ತು ಮೈಸೂರಿನ ಕಪಿಲಾ ನದಿಗಳ ಸ್ವಚ್ಛತೆ ಕೈಗೊಂಡು, ನಂಜನಗೂಡಿನಲ್ಲಿ “ಕಪಿಲಾ ಆರತಿ” ಪರಂಪರೆ ಆರಂಭಿಸಲಾಯಿತು.

2025 ದಿಗ್ವಿಜಯ - ಯುವ ಶಕ್ತಿಯ ಪಯಣ

ದಿಗ್ವಿಜಯ - ಯುವ ಶಕ್ತಿಯ ಪಯಣ

2018ರ ವಿವೇಕಾನಂದರ ಜಯಂತಿ ಯುವಾ ಬ್ರಿಗೇಡ್ ಇತಿಹಾಸದಲ್ಲೇ ಸ್ಮರಣೀಯ ಘಟ್ಟವಾಯಿತು. ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಸಹಭಾಗಿತ್ವದಲ್ಲಿ ನಡೆದ “ಸಹಸ್ರ ಸಹಸ್ರ ವಿವೇಕ ಆವಾಹನಾ” ಕಾರ್ಯಕ್ರಮದಲ್ಲಿ 10,000ಕ್ಕೂ ಅಧಿಕ ಯುವಕರು ವಿವೇಕಾನಂದರ ರೂಪಧಾರಿಗಳಾಗಿ ಒಂದೇ ವೇದಿಕೆಯಲ್ಲಿ ನಿಂತು ಪ್ರೇರಣಾ ನುಡಿಗಳನ್ನು ಏಕಕಾಲಕ್ಕೆ ಘೋಷಿಸಿದರು. ಈ ಮಹಾ ಸಮಾಗಮವನ್ನು ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಆರ್ಟ್‌ ಆಫ್‌ ಲಿವಿಂಗ್‌ ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಸಾನಿಧ್ಯ ವಹಿಸಿದ್ದರು. ಸುಮಾರು 50,000 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಹಲವು ವಿಶ್ವದಾಖಲೆಗಳಿಗೆ ಕಾರಣವಾಯಿತು.

ಚಿಕಾಗೋ ಭಾಷಣದ 125ನೇ ವರ್ಷಾಚರಣೆಯ ಅಂಗವಾಗಿ “ಮತ್ತೊಮ್ಮೆ ದಿಗ್ವಿಜಯ” ರಥಯಾತ್ರೆ ಆಯೋಜಿಸಲಾಯಿತು. ಬೆಂಗಳೂರಿನಿಂದ ಬೀದರ್ ವರೆಗೆ 60 ದಿನಗಳ ಪಯಣದಲ್ಲಿ ಯುವಕರನ್ನು ಪ್ರೇರೇಪಿಸಿದ ಈ ಯಾತ್ರೆಗೆ ಪೂರ್ವಭಾವಿಯಾಗಿ ಬೃಹತ್ ಮ್ಯಾರಥಾನ್ ನಡೆಯಿತು. “ಸಾರಥಿ ನಾನು ವಿವೇಕಾನಂದರ ರಥಕೆ…” ಹಾಡು ಯುವಜನತೆಯೊಳಗೆ ಜನಪ್ರಿಯವಾಯಿತು.

2023 ರಾಷ್ಟ್ರದ ಬೆಳವಣಿಗೆಗೆ ಅತ್ಯಗತ್ಯವಾದ ಏಕತೆ ಹಾಗು ಸೇವೆ

ರಾಷ್ಟ್ರದ ಬೆಳವಣಿಗೆಗೆ ಅತ್ಯಗತ್ಯವಾದ ಏಕತೆ ಹಾಗು ಸೇವೆ

ರಾಷ್ಟ್ರದ ಏಕತೆಗಾಗಿ, ಭಗತ್‌ ಸಿಂಗ್‌ , ರಾಜಗುರು, ಸುಖದೇವ್‌ ರ ಬಲಿದಾನದ ದಿನವನ್ನು “ಏಕತೆಗಾಗಿ ಭಗತ್” ಹೆಸರಿನಲ್ಲಿ ರಾಜ್ಯವ್ಯಾಪಿ ಪಂಜಿನ ಮೆರವಣಿಗೆಗಳ ಮೂಲಕ ಆಚರಿಸಿ ಏಕತೆಯ ಸಂದೇಶ ಹರಡಲಾಯಿತು. ದೇಶ ಒಡೆಯುವ ಶಕ್ತಿಗಳಿಗೆ “ನೀವು ಒಡೆದಷ್ಟೂ, ನಾವು ಕಟ್ಟಲು ಸಿದ್ಧ” ಎಂಬ ಸ್ಪಷ್ಟ ಸಂದೇಶ ನೀಡಲಾಯಿತು. ಅನುಭಾವ ಸಿಂಧು ಕಾರ್ಯಕ್ರಮದ ಮೂಲಕ ಸಂತ ಶಿಶುನಾಳ ಷರೀಫರ 200ನೇ ಜಯಂತಿ ಹಾಗೂ ಪುಟ್ಟರಾಜ ಗವಾಯಿಗಳ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಸದ್ಭಾವನೆಯ ಮೌಲ್ಯವನ್ನು ಸಮಾಜಕ್ಕೆ ಸಾರಲಾಯಿತು.

ಸೇವಾ ಕುಂಭ ಮೂಲಕ ಅನೇಕ ಸೇವಾ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, “ಸೇವೆ ಮತ್ತು ತ್ಯಾಗ”ದ ಆದರ್ಶವನ್ನು ಗೌರವಿಸಲಾಯಿತು. ಡಿಸೆಂಬರ್ 22ರಂದು ಶ್ರೀ ಮಾತೆ ಶಾರದಾ ದೇವಿಯವರ ಜನ್ಮದಿನದ ಅಂಗವಾಗಿ “ಅಮ್ಮ ನಮನ” ಕಾರ್ಯಕ್ರಮ ನಡೆಸಿ ಕೊರೋನಾ ಸಮಯದಲ್ಲಿ ಸೇವೆಗೈದ ದಾದಿಯರಿಗೆ, ಸೈನಿಕರ ತಾಯಂದಿರಿಗೆ ಪಾದಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಲಾಯಿತು.

2025 ಸ್ವಾತಂತ್ರ್ಯ ಶ್ರಾವಣ

ಸ್ವಾತಂತ್ರ್ಯ ಶ್ರಾವಣ

ವರ್ಷಪೂರ್ತಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯುವಾಬ್ರಿಗೇಡ್ ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು “ಸ್ವಾತಂತ್ರ್ಯ ಶ್ರಾವಣ” ಎಂಬ ಹೆಸರಿನಲ್ಲಿ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ಈ ಉತ್ಸವವು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸುವ ಕಾರ್ಯಕರ್ತರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಸಮಾರಂಭ. ಇದು ಕೇವಲ ಔಪಚಾರಿಕ ಕಾರ್ಯಕ್ರಮವಾಗಿರದೆ, ಇನ್ನಷ್ಟು ಕೆಲಸ ಮಾಡಲು ಶಕ್ತಿ ತುಂಬುವಂತಹ ಉಪನ್ಯಾಸಗಳು, ಸಾಂಸ್ಕೃತಿಕ ಕಾಯಕ್ರಮಗಳು, ಶೋಭಾಯಾತ್ರೆ ಸೇರಿದಂತೆ ವಿಭಿನ್ನ ಚಟುವಟಿಗಳನ್ನೊಳಗೊಂಡ ಒಂದು ಹಬ್ಬವೇ ಆಗಿರುತ್ತದೆ. 2015 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಸ್ವಾತಂತ್ರ್ಯ ಶ್ರಾವಣವನ್ನು ನಂತರದ ವರ್ಷಗಳಲ್ಲಿ

ಹೊನ್ನಾವರ, ಹುಬ್ಬಳ್ಳಿ, ಹಂಪಿ, ಮೈಸೂರು, ಬೀದರ್‌, ಬೆಳಗಾವಿ ಬೆಂಗಳೂರು ಹಾಗು ಶಿವಮೊಗ್ಗದಲ್ಲಿ ಭರ್ಜರಿಯಾಗಿ ಆಚರಿಸಿದ್ದೇವೆ.

ನಮ್ಮ ಶೈಲಿ

ಯುವಾ ಬ್ರಿಗೇಡ್ ಸಂಘಟನೆಯ ಕಾರ್ಯಪದ್ಧತಿ / ಶೈಲಿ

ಸೇವೆ, ಗಮನ ಮತ್ತು ದೀರ್ಘಕಾಲಿಕ ಪ್ರಭಾವಕ್ಕೆ ನಮ್ಮ ಮಾರ್ಗಸೂಚಿ

01
ನಮ್ಮ ಕಾರ್ಯಗಳ ಕೇಂದ್ರಬಿಂದು ಹಣವಲ್ಲ; ಯುವಕರ ತೋಳ್ಬಲ, ಮನೋಬಲ ಮತ್ತು ಸಮರ್ಪಣಾ ಶಕ್ತಿ.
02
ಕಾರ್ಯಕರ್ತರ ಸಮರ್ಪಣಾ ಮನೋಭಾವ ಮತ್ತು ನಿಸ್ವಾರ್ಥ ಸೇವಾ ದೃಷ್ಟಿ ಸಂಘಟನೆಯ ಆಧಾರ ಸ್ತಂಭ.
03
ಪ್ರಚಾರದ ಗೀಳಿಲ್ಲ, ಕೆಲಸಗಳ ಪರಿಚಯವಷ್ಟೇ ಗುರಿ.
04
ನಿರಂತರವಾಗಿ ಹೊಸ ಕಾರ್ಯಗಳನ್ನು ಕೈಗೊಂಡು, ಮಾಡಿದ ಹಳೇ ಕೆಲಸಕ್ಕೆ ಜೋತು ಬೀಳದೇ, ಮುಂದಿನ ಕೆಲಸಗಳತ್ತ ಹೆಜ್ಜೆ.
05
ಸಂಘಟನೆ ರಾಜಕೀಯದಿಂದ ದೂರ.
06
ಪ್ರತಿಭಟನೆ ನಮ್ಮ ಮಾರ್ಗವಲ್ಲ ಪರಿಹಾರ.
07
ಕಾರ್ಯಗಳಲ್ಲಿ ನಿರಂತರತೆ, ಶಿಸ್ತು ಮತ್ತು ದೂರದೃಷ್ಟಿ.
08
ಕಾರ್ಯಗಳ ಮೂಲಕ ಸಮಾಜದೊಂದಿಗೆ ಆತ್ಮೀಯ ಬಾಂಧವ್ಯ ಮತ್ತು ವಿಶ್ವಾಸದ ನಿರ್ಮಾಣ.
ತಂಡ ಮತ್ತು ಮಾರ್ಗದರ್ಶಕರು

ನೇತೃತ್ವ ಮತ್ತು ಮಾರ್ಗದರ್ಶಕರು

ಕಿರಣ್ ರಾಮ್
ಕಿರಣ್ ರಾಮ್
ಉತ್ತರ ರಾಜ್ಯ ಸಂಚಾಲಕರು

+91 9886282864
ರಾಜು ಕಡಕ್ಕಲ್
ರಾಜು ಕಡಕ್ಕಲ್
ದಕ್ಷಿಣ ರಾಜ್ಯ ಸಂಚಾಲಕರು

+91 7022204041
ಮೌಲ್ಯಗಳು ಮತ್ತು ನಂಬಿಕೆಗಳು

ನಾವು ಏನನ್ನು ನಂಬುತ್ತೇವೆ?

ಯುವ ಬ್ರಿಗೇಡ್ ಬಲವಾದ ಮೌಲ್ಯಗಳ ಮೇಲೆ ನಿರ್ಮಿತವಾಗಿದೆ, ಅದು ನಾವು ಅನುಸರಿಸುವ ಪ್ರತಿಯೊಂದು ಕ್ರಿಯೆ, ಯೋಜನೆ ಮತ್ತು ಕನಸನ್ನು ರೂಪಿಸುತ್ತದೆ.

ವಿವೇಕತತ್ತ್ವ

ಸ್ವಾಮಿ ವಿವೇಕಾನಂದರ ಚಿಂತನೆಗಳೇ ನಮ್ಮ ಸಂಘಟನೆಯ ಮೂಲತತ್ತ್ವ ಹಾಗೂ ಪ್ರೇರಣಾಸ್ರೋತ.

ನವ ಭಾರತ ಸೃಷ್ಟಿ

ಭಾರತವನ್ನು ಜಾಗತಿಕ ವೇದಿಕೆಯಲ್ಲಿ ವಿಶ್ವಗುರು ಸ್ಥಾನಕ್ಕೆ ಏರಿಸುವುದು ನಮ್ಮ ದೂರದೃಷ್ಟಿಯ ಧ್ಯೇಯ

ಪರಿಹಾರದ ದೃಷ್ಟಿಕೋನ

ಸಮಾಜದ ಸಮಸ್ಯೆಗಳನ್ನು ಕೇವಲ ಚರ್ಚಿಸುವುದಲ್ಲ, ಸ್ವಯಂ ಪರಿಹಾರವಾಗುವ ಕಾರ್ಯಪ್ರವೃತ್ತಿ ನಮ್ಮ ಬದ್ಧತೆ.

ನಾಯಕತ್ವ

ಯುವಾ ಬ್ರಿಗೇಡ್ — ನಾಯಕತ್ವ ನಿರ್ಮಾಣದ ಗರಡಿ ಮನೆ, ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಾಯಕರನ್ನು ರೂಪಿಸುವ ವೇದಿಕೆ.

ಸವಾಲು ಸ್ವೀಕಾರದ ಮನೋಭಾವ

ಕಾಲಕಾಲಕ್ಕೆ ಉದ್ಭವಿಸುವ ಹೊಸ ಸವಾಲುಗಳನ್ನು ಧೈರ್ಯವಾಗಿ ಸ್ವೀಕರಿಸುವ ಮನೋಭಾವ

ಕರ್ಮ ಫಲ ತ್ಯಾಗ

ಕೈಗೊಂಡ ಕಾರ್ಯದಲ್ಲಿ ಆತ್ಮತೃಪ್ತಿ ಮತ್ತು ನಿಷ್ಕಾಮ ಕರ್ಮವೇ ಪರಮ ಗುರಿ.

ಸಹಕಾರಕ್ಕೆ ಸಿದ್ಧವೇ

ನಮ್ಮೊಂದಿಗೆ ಕೈಜೋಡಿಸಿ

ಸ್ವಯಂಸೇವಕರಾಗಿ, ದಾನ ಮಾಡಿ, ಅಥವಾ ಕಾರ್ಯಕ್ರಮಗಳಲ್ಲಿ ಸಹಕರಿಸಿ - ಒಟ್ಟಾಗಿ ಶಕ್ತಿಯುತ ಸಮಾಜವನ್ನು ನಿರ್ಮಿಸೋಣ

80951 83988
ybkarnataka@gmail.com